ಹೋಮ್ಸ್ ನ ಮಹಾಧರ್ಮಾಧ್ಯಕ್ಷ: ಜಾಗತಿಕ ಶಾಂತಿಗೆ ಸಿರಿಯಾದ ಪ್ರಮುಖ ಪಾತ್ರ
ಒಲಿವಿಯರ್ ಬೊನೆಲ್ ಮತ್ತು ಕೀಲ್ಸ್ ಗುಸ್ಸಿ
ಸಿರಿಯಾದ ಪರಿವರ್ತನಾ ಅಧ್ಯಕ್ಷ ಅಹ್ಮದ್ ಅಲ್-ಶರಾ ಮಾರ್ಚ್ 13 ರಂದು ಸಾಂವಿಧಾನಿಕ ಘೋಷಣೆಗೆ ಸಹಿ ಹಾಕಿದರು. ಅದರೊಂದಿಗೆ, ಹಿಂದಿನ ಆಡಳಿತ ಮತ್ತು ಸಂವಿಧಾನವನ್ನು ರದ್ದುಗೊಳಿಸಲಾಯಿತು ಹಾಗೂ "ನಾಲ್ಕರಿಂದ ಐದು ವರ್ಷಗಳಲ್ಲಿ" ಚುನಾವಣೆಗಳು ನಡೆಯಲಿವೆ.
ಇದು ಆಮೂಲಾಗ್ರ ಇಸ್ಲಾಂ ಧರ್ಮದ ಪಂಥಗಳಿಂದ ಬೆಂಬಲಿತವಾದ ಪರಿವರ್ತನಾ ಸರ್ಕಾರದ ಸಶಸ್ತ್ರ ಪಡೆಗಳಿಂದ ದೇಶದ ಪಶ್ಚಿಮ ಭಾಗದಲ್ಲಿ ಸುಮಾರು 1,600 ಜನರು, ಮುಖ್ಯವಾಗಿ ಅಲಾವೈಟ್, ಹತ್ಯಾಕಾಂಡದಿಂದ ಗುರುತಿಸಲ್ಪಟ್ಟ ಒಂದು ತಿಂಗಳ ಸಂದರ್ಭದಲ್ಲಿ ಬಂದಿತು.
ರೋಮ್ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮಧ್ಯ ಸಿರಿಯಾದ, ಸಿರಿಯಾಕ್ ಕಥೋಲಿಕ ಮಹಾಧರ್ಮಾಧ್ಯಕ್ಷರು, ಹೋಮ್ಸ್ ನ ಮಹಾಧರ್ಮಾಧ್ಯಕ್ಷರಾದ ಜಾಕ್ವೆಸ್ ಮೌರಾದ್ ರವರು ವ್ಯಾಟಿಕನ್ ಸುದ್ಧಿಯ ಒಲಿವಿಯರ್ ಬೊನೆಲ್ರವರಿಗೆ ನೀಡಿದ ಸಂದರ್ಶನದಲ್ಲಿ ದೇಶದ ಭವಿಷ್ಯದ ಬಗ್ಗೆ ತಮ್ಮ ಕಳವಳವನ್ನು ಹಂಚಿಕೊಂಡರು.
ಇಸ್ಲಾಂ ಧರ್ಮದ ನಿಜವಾದ ಮುಖವಲ್ಲ
ಹತ್ಯಾಕಾಂಡದ ಬೆಳಕಿನಲ್ಲಿ,ಮಹಾಧರ್ಮಾಧ್ಯಕ್ಷರಾದ ಮೌರಾದ್ ರವರು ದುರದೃಷ್ಟವಶಾತ್, ಹಿಂಸಾತ್ಮಕ ಕೃತ್ಯಗಳು, ಹತ್ಯಾಕಾಂಡಗಳು ಮುಗಿದಿಲ್ಲ ಎಂದು ವಿವರಿಸಿದರು. ಅವು ಇನ್ನೂ ನಡೆಯುತ್ತಿವೆ ಎಂಬ ಅಂಶವು "ಈ ಸರ್ಕಾರದ ಪ್ರಾಮಾಣಿಕತೆಯನ್ನು" ಪ್ರಶ್ನಿಸುತ್ತದೆ. ಏಕೆಂದರೆ ಮಾಡಿದ ಭಾಷಣಗಳು ಮತ್ತು ವಾಸ್ತವದ ನಡುವೆ ದೊಡ್ಡ ವ್ಯತ್ಯಾಸವಿದೆ. ಏಕೆಂದರೆ ಸರ್ಕಾರವು ಕುಶಲತೆಯಿಂದ ವರ್ತಿಸುತ್ತಿದೆ ಅಥವಾ ಅವರು ದೇಶವನ್ನು ನಿರ್ವಹಿಸಲು ಅಸಮರ್ಥರಾಗಿದ್ದಾರೆ.
ದೇಶದಲ್ಲಿ ಏನು ನಡೆಯುತ್ತಿದೆ ಎಂಬುದು ಸಿರಿಯಾದಂತಹ ದೇಶದಲ್ಲಿ ಇಸ್ಲಾಂ ಧರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಅದು ಎಂದಿಗೂ "ಮತಾಂಧ ಇಸ್ಲಾಂನ ಮುಖವನ್ನು ಹೊಂದಿಲ್ಲ" ಎಂದು ಅವರು ಹೇಳಿದರು. ಮಹಾಧರ್ಮಾಧ್ಯಕ್ಷರಾದ ಮೌರಾದ್ ರವರು "ಈ ಹಿಂಸಾತ್ಮಕ ಕೃತ್ಯಗಳು, ಈ ಹತ್ಯಾಕಾಂಡಗಳು, ಇಸ್ಲಾಂ ಧರ್ಮವನ್ನು ನಕಾರಾತ್ಮಕ ರೀತಿಯಲ್ಲಿ ಪ್ರಸ್ತುತಪಡಿಸುವ ಈ ಮುಖಗಳಿಂದಾಗಿ ಇಸ್ಲಾಮೋಫೋಬಿಯಾ ಅಸ್ತಿತ್ವದಲ್ಲಿದೆ" ಎಂದು ವಾದಿಸಿದರು. "ಇಸ್ಲಾಂ ಧರ್ಮವು ಅದರ ಮೂಲದಲ್ಲಿ, ಹೀಗಿಲ್ಲ" ಎಂದು ಅವರು ಒತ್ತಿ ಹೇಳಿದರು.
ಇಲ್ಲಿನ ಜನಸಂಖ್ಯೆಯು ಅರ್ಧಕ್ಕಿಂತ ಹೆಚ್ಚು ಜನರು ಸುನ್ನಿ ಮುಸ್ಲಿಂ ಧರ್ಮದವರಾಗಿರುವುದರಿಂದ, ಕ್ರೈಸ್ತರು ಅಲ್ಪಸಂಖ್ಯಾತರು ಮತ್ತು ಇಸ್ಲಾಂ ಧರ್ಮದ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಮಹಾಧರ್ಮಾಧ್ಯಕ್ಷರು ವಿವರಿಸಿದರು. ಬದಲಿಗೆ, ಅವರು ಎರಡು ಗುಂಪುಗಳ ನಡುವಿನ ಹೆಚ್ಚು ಭ್ರಾತೃತ್ವ ಮತ್ತು ಶಾಂತಿಯುತ ಸಂಬಂಧವನ್ನು ಸೂಚಿಸಿದರು.
ಹೊಸ ಸಂವಿಧಾನ
ಹೊಸ ಸಂವಿಧಾನ ಮತ್ತು ಪರಿವರ್ತನಾ ಸರ್ಕಾರವು ದೇಶವನ್ನು ಇಸ್ಲಾಂ ಧರ್ಮದ ಕಾನೂನಿನ ಅಡಿಯಲ್ಲಿ ಇರಿಸಿದೆ. ಮಹಾಧರ್ಮಾಧ್ಯಕ್ಷರಾದ ಮೌರಾದ್ ರವರು ಇದರ ಪರವಾಗಿಲ್ಲ ಆದರೆ "ಸಮಸ್ಯೆಯೆಂದರೆ ಸಿರಿಯಾವು ಇಸ್ಲಾಂ ಧರ್ಮವಾಗಬೇಕೆ ಅಥವಾ ಬೇಡವೇ ಅಲ್ಲ."
ಪರಿಣಾಮವಾಗಿ, ಅನೇಕ ಸಿರಿಯದವರು ಭಯಪಡುತ್ತಾರೆ ಮತ್ತು ಸರ್ಕಾರವನ್ನು ನಂಬುವುದಿಲ್ಲ ಎಂದು ಮಹಾಧರ್ಮಾಧ್ಯಕ್ಷರಾದ ಮೌರಾದ್ ರವರು ವಿವರಿಸಿದರು. ವಲಸೆ ಅನೇಕ ಜನರಿಗೆ ಸಂಭಾಷಣೆಯ ವಿಷಯವಾಗಿದೆ ಏಕೆಂದರೆ, "ನಮ್ಮ ದೇಶದಲ್ಲಿ ನಾವು ಅಪರಿಚಿತರಂತೆ ಭಾವಿಸುತ್ತೇವೆ" ಎಂದು ಅವರು ಹೇಳಿದರು.
ಹೊಸ ಸಂವಿಧಾನವನ್ನು ಚರ್ಚಿಸುವಲ್ಲಿ ಪರಿವರ್ತನಾ ಸರ್ಕಾರವು ಎಲ್ಲಾ ವಿಭಿನ್ನ ಗುಂಪುಗಳನ್ನು ಒಳಗೊಂಡಿಲ್ಲ ಎಂಬ ಅಂಶದಲ್ಲಿ ಒಂದು ಮೂಲಭೂತ ಸಮಸ್ಯೆ ಇದೆ. "ಆದ್ದರಿಂದ, ನಾವು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದಿಂದ ಬಹಳ ದೂರದಲ್ಲಿದ್ದೇವೆ" ಎಂದು ಅವರು ಒತ್ತಿ ಹೇಳಿದರು.
ಕೈ ಜೋಡಿಸಿ ಕೆಲಸ ಮಾಡುವುದು
ಅಲೆಪ್ಪೊದಲ್ಲಿ, ಕ್ರೈಸ್ತರು ಹೊಸ ಸರ್ಕಾರಕ್ಕೆ ಸಂಪೂರ್ಣವಾಗಿ ಕ್ರೈಸ್ತರ ಜನಸಂಖ್ಯೆಯನ್ನು ಪ್ರತಿನಿಧಿಸುವ ಜಂಟಿ ಘೋಷಣೆಯನ್ನು ಸಲ್ಲಿಸಿದರು. ಆದರೆ ಕ್ರೈಸ್ತರಲ್ಲಿ ಸ್ವಲ್ಪ ಸಾಮರಸ್ಯವಿದ್ದರೂ, ಈ ರೀತಿಯ ಉಪಕ್ರಮ ಮತ್ತು ಏಕತೆಯನ್ನು ಎಲ್ಲೆಡೆ ಅಥವಾ ಪ್ರತಿಯೊಂದು ಸಂದರ್ಭದಲ್ಲೂ ಅನ್ವಯಿಸಲಾಗುವುದಿಲ್ಲ ಎಂದು ಮಹಾಧರ್ಮಾಧ್ಯಕ್ಷರಾದ ಮೌರಾದ್ ರವರು ಗಮನಸೆಳೆದರು.
"ನಾವು ಪ್ರಪಂಚದ ಇತರ ಧರ್ಮಸಭೆಗಳಂತೆ ಸಿನೊಡ್ನ ರೀತಿಯಲ್ಲಿ ಕ್ರೈಸ್ತರಿಗೆ ಸಮ್ಮೇಳನವನ್ನು ಆಯೋಜಿಸಲು ಪ್ರಯತ್ನಿಸಿದ್ದೇವೆ" ಎಂದು ಅವರು ವಿವರಿಸಿದರು. ಆದಾಗ್ಯೂ, ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಏಕೆಂದರೆ ಸಮಾಜದ ಒಳಿತಿಗೆ, ಒಂದೇ ಧ್ವನಿಯಲ್ಲಿ ಒಗ್ಗಟ್ಟಾಗಿ ಮಾತನಾಡಲು ನಮ್ಮಲ್ಲಿ ನೈಜವಾದ ಆಶಯವಿಲ್ಲ" ಎಂದು ಅವರು ಹೇಳಿದರು.
ಜಾಗತಿಕ ಶಾಂತಿಗೆ ಸಿರಿಯಾದ ಪಾತ್ರ
ಮಹಾಧರ್ಮಾಧ್ಯಕ್ಷರಾದ ಮೌರಾದ್ ರವರು "ನಾವು ಇಂದು ಸಿರಿಯಾದಲ್ಲಿ ವಾಸಿಸುತ್ತಿರುವುದು ಅಂತರರಾಷ್ಟ್ರೀಯ ಸಮುದಾಯದ ಜವಾಬ್ದಾರಿಯ ಕೊರತೆಯಿಂದಾಗಿ" ಎಂದು ವಾದಿಸಿದರು. ನಾನು ಮೊದಲು ಸಿರಿಯಾದಲ್ಲಿ ಶಾಂತಿಯನ್ನು ಸಾಧಿಸಲು ಜಾಗತಿಕ ಜನಸಂಖ್ಯೆಗೆ ಸವಾಲು ಹಾಕಿದ್ದೇನೆ, ಏಕೆಂದರೆ "ಸಿರಿಯಾವು ಏಷ್ಯಾ ಮತ್ತು ಯುರೋಪ್ ಅನ್ನು ಸಂಪರ್ಕಿಸುವ ದೇಶವಾಗಿದೆ."
ಈ ಶಾಂತಿಯನ್ನು ಸಾಧಿಸುವ ಒಂದು ಹೆಜ್ಜಯೆಂದರೆ ಅಂತರಾಷ್ಟ್ರೀಯ ನಿರ್ಬಂಧಗಳನ್ನು ತೆಗೆದುಹಾಕುವುದು ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು. ಆರಂಭದಲ್ಲಿ ಅವುಗಳನ್ನು ಏಕೆ ಹೇರಲಾಯಿತು ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವನ್ನು ನಾನು ಒತ್ತಿಹೇಳಿದ್ದೇನೆ: ಅಸ್ಸಾದ್ ರವರ ಕುಟುಂಬದ ವಿರುದ್ಧ ನಿರೋಧಕವಾಗಿ ಅವುಗಳನ್ನು ಹಾಕಿದರೆ, ಇನ್ನು ಮುಂದೆ ಅವುಗಳ ಅಗತ್ಯವಿರುವುದಿಲ್ಲ. ನಿರ್ಬಂಧಗಳನ್ನು ತೆಗೆದುಹಾಕುವುದು ಎಂದರೆ ಜನರು ತಮ್ಮ ಕಾರ್ಯಗಳಿಗೆ ಹಿಂತಿರುಗಲು ಸಹಾಯ ಮಾಡುವುದು. ಇದು ಕೆಲಸ ಮತ್ತು ಯೋಜನೆಗಳನ್ನು ಮರುಪ್ರಾರಂಭಿಸುವುದು ಎಂದರ್ಥ. ಇದು ಜನರು ತಮ್ಮ ಶ್ರಮದಿಂದ ಬದುಕುವ ಅವಕಾಶವನ್ನು ಖಾತರಿಪಡಿಸುತ್ತದೆ.
ನಿರ್ಬಂಧಗಳನ್ನು ತೆಗೆದುಹಾಕಿದ ನಂತರ, ಅವರು ಸಿರಿಯದವರಿಗೆ ನಾಲ್ಕು ವಿಷಯಗಳ ಅಗತ್ಯವಿದೆ ಎಂದು ಒತ್ತಿ ಹೇಳಿದರು: ಅವು ಆಹಾರ, ವೈದ್ಯಕೀಯ ಆರೈಕೆ, ಶಿಕ್ಷಣ ಮತ್ತು ವಸತಿ ಸಮಸ್ಯೆಗೆ ಪರಿಹಾರ. ಈ ಎಲ್ಲವನ್ನು ಮನಸ್ಸಿನಲ್ಲಿಟ್ಟುಕೊಂಡು, ಸಿರಿಯಾದ ಪುನರ್ನಿರ್ಮಾಣವು ಉತ್ತಮವಾಗಿ ಅಭಿವೃದ್ಧಿ ಹೊಂದಿದ ದೇಶವನ್ನು ರಚಿಸುವುದರ ಮೇಲೆ ಕೇಂದ್ರೀಕರಿಸಬಹುದು.